Followers

Saturday, 18 January 2020

ಲಿಂಗವಂತರಿಗೆ ಬಸವಣ್ಣನೆ  ಗುರು :

ಲಿಂಗವಂತರಲ್ಲಿ ಮದುವೆ ಹೆಣ್ಣಿನ ಕಡೆಯೂ ಆಗಬಹುದು ಗಂಡಿನ ಕಡೆಯೂ ಆಗಬಹುದು. ಆದರೆ ಈ ಮದುವೆ ಅಂಗವಾಗಿ ಅಳಿಯನಿಗೆ ಮನೆಗೆ ಕರೆದು ಕೊಳ್ಳುವ ಒಂದು ಕಾರ್ಯಕ್ರಮ ಜರುಗುತ್ತದೆ. ಈ ಸಮಯದಲ್ಲಿ ಅಳಿಯನ ಕಡೆಯವರು ಮನೆಯ ಸಮೀಪದ ಮಂದಿರ ಅಥವಾ ಮಠದಲ್ಲಿ ಬಂದಿಳಿಯುತ್ತಾರೆ . 
ಅವರನ್ನು ವಿಶೇಷ ಸನ್ಮಾನ ದೊಂದಿಗೆ ಸ್ವಾಗತ ಮಾಡಿಕೊಂಡು, ಸಕ್ಕರೆಯ ವಿನಿಮಯ ಮಾಡಿಕೊಂಡು ಮನೆಗೆ ಬಾಜಿ ಭಜಂತ್ರಿ ಯೊಂದಿಗೆ ಕರೆದೊಯ್ಯಲಾಗುತ್ತದೆ. ಮನೆಗೆ ಹೋದಮೇಲೆ ಅಥಿತಿ ಸತ್ಕಾರ ವಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಮಹತ್ವದ ಘಟನೆ ನಮ್ಮ ಸಂಸ್ಕೃತಿಯ ಅಂಗವಾಗಿ ಬೆಳೆದು ಬಂದಿದೆ. ಇದನ್ನು ಎಲ್ಲರು ಗಮನಿಸಬೇಕು. ಮನೆಗೆ ಬಂದ  ಅಳಿಯ ವಧುವನ್ನು ಕರೆದುಕೊಂಡು ಹೋಗುವಾಗ ಜಗ್ಗುಲಿಗೆ ಹೋಗಿ ಬಸವಣ್ಣನ (ನಂದಿ ) ಮೂರ್ತಿಯನ್ನೆ ತೆಗೆದುಕೊಂಡು ಹೋಗುತ್ತಾನೆ. ಅಲ್ಲಿಯ ಹಿರಿಯರು ಅವನನ್ನು ಬಸವಣ್ಣನ ಮೂರ್ತಿಯನ್ನೆ ತೆಗೆದುಕೊಳ್ಳುವಂತೆ ಹೇಳುತ್ತಾರೆ. ಇಲ್ಲಿ ಅವರು ಬೇರೆ ದೇವರ ಮೂರ್ತಿ ತೆಗೆದುಕೊಳ್ಳುವಂತೆ ಹೇಳುವದಿಲ್ಲ, ಕಾರಣ ವೇನಿರಬಹುದು? ಕಾರಣವಿಷ್ಟೆ ಲಿಂಗವಂತರಿಗೆ ಬೇಕಾದುದು ಕೇವಲ ಬಸವಣ್ಣ ಮತ್ತಾವ ದೇವರು ಅಲ್ಲ. ಈ ಕಾರಣಕ್ಕಾಗಿಯೆ ಅಳಿಯಂದಿರು ಕೇವಲ ಬಸವಣ್ಣನ ಮೂರ್ತಿಯನ್ನೆ ತೆಗೆದುಕೊಂಡು ಹೋಗುತ್ತಾರೆ.
ಇದರಿಂದ ಬಸವಣ್ಣನೆ  ಲಿಂಗವಂತರಿಗೆ ಸರ್ವಸ್ವ ಎಂಬುದು ಸ್ಪಷ್ಟ . ನಮ್ಮ  ಪೂರ್ವಜರು ಇದನ್ನು ೮೦೦ ವರ್ಷಗಳ ವರೆಗೆ ಅಕ್ಷರ ಸಹ ಪಾಲಿಸಿದರು ಆದರೆ ಈಗೀಗ ಲಿಂಗವಂತರು ಬಸವಣ್ನನನ್ನು ಬಿಟ್ಟು ಬೇರೆ ದೇವರ ಹಿಂದೆ ಹೋಗುತ್ತಿರುವುದು ಖಂಡನಾರ್ಹ್ . 

No comments:

Post a Comment